Sunday, March 9, 2008

ಮಿತವ್ಯಯಿ

ಮನೇನಲ್ಲಿ ಎಲ್ಲರೂ ಹೇಳ್ತಾರೆ ನಾನು ಥೇಟ್ ನನ್ನ ಅಜ್ಜನ ತರಹ ಅಂತ. ಯಾವ ವಿಷಯ ದಲ್ಲಿ ಅಂದ್ಕೊಂಡ್ರಿ..? ಅದೇ ದುಡ್ಡಿನ ವಿಷಯ ದಲ್ಲಿ. ಅಜ್ಜ ಪೈಸೆ ಪೈಸೆಗೆ ಲೆಕ್ಕ ಹಾಕಿಡುತಿದ್ದರು. ಅಂದಿನ ಕಾಲವೇ ಹಾಗಿತ್ತು ಬಿಡಿ.. ನನಗೂ ಕೂಡ ದುಂದು ವೆಚ್ಚದಲ್ಲಿ ನಂಬಿಕೆ ಇಲ್ಲ. ಯಾರು ದುಡ್ಡನು ಖರ್ಚು ಮಾಡಲು ಸ್ವಲ್ಪ ಮೇಲೆ ಕೆಳಗೆ ನೋಡುತ್ತಾನೋ ಅವನಿಗೆ ’ಪಿಟ್ಟಾಸಿ’ ಅಂತಾರೆ. ಮನೇನಲ್ಲಿ ಈ ಬಿರುದು ನಂಗೆ ಸಿಕ್ಕಿದೆ. ಯಾಕೆ ಅಂತೀರಾ...ಕೆಳಗಿನ ಒಂದು ಉದಾಹರಣೆ ಓದಿ.

ಮನೆಗೆ ಸೋಪು, ಟೂಥ್-ಪೇಷ್ತು ನಂತಹ ಸಣ್ಣ ಪುಟ್ಟ ವಸ್ತುಗಳನ್ನು ತರೋದು ನನ್ನ ಕೆಲಸ. ಒಂದ್ಸಲ ಏನಾಯ್ತು ಅಂದ್ರೆ ಮೂರು ಸೋಪುಗಳನ್ನು ಅಂಗಡಿಯಿಂದ ತಂದೆ.. ಅದೂ 76% TFM ನದ್ದು. ಸೋಪ್ ನ ಪರಿಮಳ ನೋಡಿ ಅಣ್ಣ ಕೇಳಿದ "ಎಷ್ತು ಕೊಟ್ಟಿ..?". ನಾನಂದೆ 16 ರೂಪಾಯಿ. ಯಾವತ್ತೂ ಕಡಿಮೆ ಬೆಲೆಯ ಸಾಬೂನುಗಳನ್ನು ತರುತ್ತಿದ್ದ ನಾನು, 16 ರೂಪಾಯಿ ಅಂದಾಕ್ಶಣ ಅಣ್ಣನಿಗೆ ಆಶ್ಚರ್ಯವೋ ಆಶ್ಚರ್ಯ. ಕೇಳಿಯೇ ಬಿಟ್ಟ "ಏನೋ ಇಷ್ಟು ರೇಟಿದ್ದು ತಂದಿ..???". ನಾನೂ ಅಷ್ಟೇ ತಣ್ಣಗಾಗಿ ಹೇಳಿದೆ "3ಕ್ಕೆ ಒಟ್ಟಿದೆ 16 ರೂಪಾಯಿ".

Saturday, December 29, 2007

ನನ್ನ ಶೀತ

ನನ್ನ ಶೀತ, ಕೆಮ್ಮು-ದಮ್ಮು ನೋಡಿ
ಡಾಕ್ಟರ್ ಹೇಳಿದರು
ತಣ್ಣೀರು, ಬಾಳೆಹಣ್ಣು ವರ್ಜ್ಯ

ಮನೇಲಿ ಎರಡು ಹಲ್ವ ತಿಂದ ಮೇಲೆ
ಗೊತ್ತಾಗಿದ್ದು
ಅದು ಬಾಳೆಹಣ್ಣಿದ್ದು !!!

Monday, September 17, 2007

ಚೌತಿಯ ಸಂಭ್ರಮ

ಅಂದು ಶನಿವಾರ 15ನೇ ತಾರೀಖು.. ಬೆಳಿಗ್ಗೆ ಡೈರಿ ಗೆ ಹಾಲು ಕೊಡಲಿಕ್ಕಿಲ್ಲಾಂತ ತಡವಾಗಿ ಏಳೋ plan ಹಾಕಿ ಕೊಂಡಿದ್ದೆ. ಆದರೆ ಅಂದು ಗಣೇಶ ಚತುರ್ಥಿಯಾದ್ದರಿಂದ ಅಮ್ಮ ಬೇಗನೆ ಎಬ್ಸಿದ್ರು. ದೈನಂದಿನ ಕೆಲಸ ಎಲ್ಲಾ ಮುಗ್ಸಿ ಸ್ನಾನ ಮಾಡಿದ ನಂತರ ಚೌತಿಯ ತಯಾರಿ ಶುರುವಾಯ್ತು. ಮಂಟಪ ಕಟ್ಟೋದು, ಅದನ್ನು ಸಿಂಗರಿಸೋದು, light ಡೆಕೊರೇಶನ್ ಇತ್ಯಾದಿ ಇತ್ಯಾದಿ... ಇಷ್ಟಾದ್ರೂ ಗಣಪತಿ ಮಾತ್ರಾ ರಟ್ಟಿನ ಡಬ್ಬದಲ್ಲೇ ಮಲಗಿದ್ದ.. ಬೆಕ್ಕಿನ ಮರಿಯ ಹಾಗೆ. ಅವನನ್ನ ಎಬ್ಸಿ, ಮಂಟಪದಲ್ಲಿ ಕೂರ್ಸಿ, ಪೂಜೆ ಮಾಡಿ ಅವ್ನ ಹೆಸರಲ್ಲಿ ನೆಂಟರಿಷ್ಟರ ಜೊತೆ ಮೃಷ್ಟಾನ್ನ ಭೊಜಾನ ಮಾಡಿ ತೇಗಿದಾಗ ಮದ್ಯಾಹ್ನ 3 ಗಂಟೆ. ಸ್ವಲ್ಪ ಹೊತ್ತು ನಿದ್ದೆ ಮಾಡಿ ಎದ್ದಾಗ Srilanka Vs NewZealand ಮಧ್ಯೆ 20-20 match ನಡೀತಿತ್ತು. ಅದು ಮುಗಿಯೋ ಹೊತ್ತಿಗೆ ಸರಿಯಾಗಿ ಗಣೇಶಂಗೆ ವಿದಾಯ ಹೇಳೋ ಸಮಯಾನೂ ಸಮೀಪಿಸ್ತು. ಗಣಪತಿಗೆ ದಾರಿ ಮಧ್ಯೆ ತಿನ್ಲಿಕೆ ಅರಳು ಬೆಲ್ಲ parcel ready ಮಾಡೋ ಜವಾಬ್ದಾರಿ ನನ್ನ ಪಾಲಿಗೆ ಬಂತು. ಅಪ್ಪ ರಾತ್ರಿಯ ಪೂಜೆ ಮಾಡಿದಾಗ ನಾವು ಘಂಟೆ ಹೊಡೆಯುತ್ತಿದ್ದ ಹಾಗೆ ಹೊರಗೆ ಮಳೆರಾಯ ತಾನೂ ಶುರುಹಚ್ಕೊಂಡ. ನಾವು ಬಿಟ್ಟೇವಾ.. ಅಕ್ಷಯ್ ಕುಮಾರ್ ನ 'ತು ಚೀಸ್ ಬಡೀಹೈ ಮಸ್ಥ್ ಮಸ್ಥ್...' styleನಲ್ಲಿ ಬಟ್ಟೇನ ತಲೆಗೆ ಸುತ್ಕೊಂಡು ತೋಟದ ಬಾವಿ ಕಟ್ಟೆ ತನಕ ಮೆರವಣಿಗೆಯಲ್ಲಿ (4-5 ಜನ) ಘಂಟಾ ಘೋಷದೊಂದಿಗೆ ಹೊರಟೆವು. ಅಪ್ಪ ಗಣೇಶನಿಗೆ ಅಭಿಷೇಕ ಮಾಡಿ parcel ಕೈಯಲ್ಲಿಟ್ಟು 'ಗೋವಿಂದಾನ್ನಿ ಗೋವಿಂದಾ' ಅಂದಾಗ ನಾವೂ ಸಾಧ್ಯವಾದಷ್ಟು ಗಟ್ಟಿಯಾಗಿ ಧ್ವನಿ ಸೇರ್ಸಿದ್ವಿ. ಇದ್ದಕ್ಕಿದ್ದಂತೆ ಮಳೆರಾಯನಿಗೆ ಏನಾಯ್ತೋ ಏನೋ..ಜೋರಾಗಿ ಸುರಿಯಲಿಕ್ಕೆ ಪ್ರಾರಂಭಿಸಿದ. ಇವನು ಮಾಡಿದ ಉಪಕಾರ ಏನೆಂದರೆ ಚಂದ್ರನನ್ನ ನಮಗೆ ಕಾಣದ ಹಾಗೆ ತನ್ನ ಮರೆಯಲ್ಲಿ ಬಚಿಡ್ಕೊಂದದ್ದು. ಮದ್ಯಾಹ್ನ ಉಳಿದ ಭಕ್ಶ್ಯಗಳನ್ನು ಮುಗ್ಸಿ ಊಟ ಮಾಡಿ TV ಮುಂದೆ ಕೂತಾಗ.. South Africa-Bangla match ನಡೀತಿತ್ತು. ಪಾಪಿಗಳು...ಬೋ. ಮಕ್ಳು......ಯಾರ ಬಗ್ಗೆ ಹೇಳ್ತಾ ಇದ್ದೇನೆ ಅಂದ್ಕೊಂಡ್ರಿ? ಅದೇ cameramenಗಳು.. ಚಂದ್ರನನ್ನ ತೋರ್ಸೇ ಬಿಟ್ರು.. Live ಆಗಿ.. ಅದೂ 21 inch TVನಲ್ಲಿ Fit ಆಗೊವಷ್ತು zoom ಮಾಡ್ಕೊಂಡು. ಅವಕ್ಕೆ ಒಂದಷ್ಟು ಹಿಡಿ ಶಾಪ ಹಾಕಿ ನಿದ್ರೆಗೆ ಜಾರಿದಾಗ ಗಂಟೆ 12:45. ಬೆಳಿಗ್ಗೆ ಎದ್ದದ್ದು ಅಮ್ಮನ ಸುಪ್ರಭಾತ ದೊಂದಿಗೆ 8:00ಕ್ಕೆ.

Saturday, August 18, 2007

ಅಮ್ಮಾ ನಿನ್ನ ಎದೆಯಾಳದಲ್ಲಿ..

ಅನ್ನ ದೇವರ ಬಾಲ್ಯ

ಬೆಳೆವ ಸಿರಿ..

ಪ್ರಕೃತಿ ಮಾತೆ ನಕ್ಕಾಗ..